Wednesday 8 April 2015

ಕವನ-ಮನಸ್ಸು

ಕಳೆದ ವಾರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಕವನ


http://www.panjumagazine.com/?p=10555

ಅಂದು ಬಲತ್ಕಾರಕ್ಕೆ
ಒಳಗಾದ ಮನಸ್ಸು
ಹಡೆದ ನೆನಪುಗಳು
ಇಂದು ಬೆಳೆದು ನಿಂತಿವೆ
ಅನಾಥವಾಗಿ...
ಅದರಲ್ಲಿ ಕೆಲವು ಕುರೂಪಿ
ಆದರೆ, ಮತ್ತೆ ಕೆಲವು
​ನಿರ್ದಯಿಗಳು ​....
ಕಣ್ಣಸಡಿಲಿಕೆಯಲ್ಲಿ
ಬಿಟ್ಟ ಬಾಣಗಳು
ನೇರವಾಗಿ ಎದೆಗೆ ನಾಟಿ
ಅಸಹಾಯಕತೆಯ ಕಂಡು
ಗಹಗಹಿಸಿ ನಗುತಿವೆ
ನೆನಪುಗಳ ಹೊತ್ತು ಹೆತ್ತ
ವಣೆ ನಿನ್ನದೇ ಏಂದು.....

ಕಂಡವರಿಲ್ಲ ಕಂಬನಿಯ
ಹಸಿವ, ತೀರಿಸುವವರಿಲ್ಲ
ಹಂಬಲಿಯ ಋಣವ
ಅರ್ಧ ಬಿಂದಿಗೆ ನೀರು
ತುಂಬಿ ತುಳುಕುತಿವೆ
ಕೆನ್ನೆ ದಿಣೆಗಳ ಮೇಲೆ....

ಕಾಲುದಾರಿ ಕಡಿದಾಗಿದೆ
ತುಂಬಾ ಇಳಿಜಾರಿದೆ
ಅಲ್ಲಲ್ಲಿ, ಸೋಲುವವಳು
ನಾನಲ್ಲ ಛಲಗರ್ತಿ ನಾ
ನನ್ನದಲ್ಲದ ತಪ್ಪಿಗೆ
ಚನ್ನಕೇಶವನ ಆಣೆ
ಸೋತು ಗೆಲ್ಲುವವಳು ನಾನೆ..

-ನಗೆಮಲ್ಲಿಗೆ

No comments:

Post a Comment